ಸಂದೀಪ್ ಶೆಟ್ಟಿ (ಜನನ ೨೩ ಜುಲೈ) ತುಳು ಚಿತ್ರರಂಗಗಳಾದ ದಂಡ್, ಮದಿಮೆ, ಎಕ್ಕಸಕ ಮತ್ತು ಅನೇಕ ನಾಟಕಗಳು ಮತ್ತು ರಂಗ ಪ್ರದರ್ಶನಗಳಲ್ಲಿ ಹೆಸರುವಾಸಿಯಾದ ದಕ್ಷಿಣ ಕನ್ನಡದ ನಟ. ಇವರು ಮತ್ತು ಇವರ ಪ್ರಶಂಸ ತಂಡ ಕರಾವಳಿ ಕರ್ನಾಟಕದಲ್ಲಿ ನಡೆಯುತ್ತಿರುವ ಬಲೆ ತೆಲಿಪಾಲೆ ಕಾಮಿಡಿ ಶೋ ನಲ್ಲಿ ಗೆದ್ದಿದ್ದರು. ಸಂದೀಪ್ ಮಸ್ಕತ್, ದುಬೈ, ಕುವೈತ್ ಮತ್ತು ಬಹ್ರೇನ್‌ನಂತಹ ಅಂತರಾಷ್ಟ್ರೀಯ ಸ್ಥಳಗಳಲ್ಲಿ ಹಾಗೂ ಬೆಂಗಳೂರು, ಮುಂಬೈ ಮತ್ತು ಪುಣೆ ಸೇರಿದಂತೆ ಭಾರತದೊಳಗಿನ ಸ್ಥಳಗಳಲ್ಲಿ ೧,೦೦೦ ಕ್ಕೂ ಹೆಚ್ಚು ಸ್ಟೇಜ್ ಶೋಗಳನ್ನು ಪ್ರದರ್ಶಿಸಿದ್ದಾರೆ. == ಆರಂಭಿಕ ಜೀವನ == ಸಂದೀಪ್ ಶೆಟ್ಟಿ ಜುಲೈ ೨೩ ರಂದು ಉಡುಪಿ ಜಿಲ್ಲೆಯ ಶಿರ್ವಾ ಗ್ರಾಮದ ಪಕ್ಕದ ಮಣಿಬೆಟ್ಟೆಯಲ್ಲಿ ಜನಿಸಿದರು. ಬಿಬಿಎಂ ಮತ್ತು ಎಂಬಿಎ ಪದವಿಗಳನ್ನು ಪಡೆದ ಸಂದೀಪ್ ಶೆಟ್ಟಿ ಅವರು ಸುಂದರ್ ಶೆಟ್ಟಿ ಮತ್ತು ರತ್ನ ಶೆಟ್ಟಿ ಅವರ ಪುತ್ರ. ಸಂದೀಪ್ ೧೯೯೮ ರಲ್ಲಿ 'ನಾಥುನಾ ಪಾರು' ಎಂಬ ತುಳು ನಾಟಕವನ್ನು ಬರೆದು ನಿರ್ದೇಶಿಸುತ್ತಾ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. == ಚಿತ್ರಕಥೆ == == ಪ್ರಶಸ್ತಿಗಳು == ೨೦೧೫ - ಬಲೆ ತೆಲಿಪಾಲೆ ವಿಜೇತ ಪ್ರಶಂಸ ತಂಡ ೨೦೧೪ - ಬಲೆ ತೆಲಿಪಾಲೆ ವಿಜೇತ ಪ್ರಶಂಸ ತಂಡ ೨೦೧೩ - ಬಲೆ ತೆಲಿಪಾಲೆ ವಿಜೇತ ಪ್ರಶಂಸ ತಂಡ ಮುಂಬೈ ಕಲಾಭಿಮಾನಿಗಳು ಅವರಿಂದ -'ಕುಸಾಲ್ದ ಬಿರ್ಸೆ' ಪುತ್ತೂರು ನಾಟಕ ಸ್ಪರ್ಧೆಯಲ್ಲಿ 'ಜನಮೆಚ್ಚಿದ ಹಾಸ್ಯ ನಟ' ಪ್ರಶಸ್ತಿ. == ಉಲ್ಲೇಖಗಳು ==